ನಾಗಮಂಡಲ ಚಿತ್ರದ ಈ ಗೀತೆ ನನ್ನ ಅಚ್ಚುಮೆಚ್ಚಿನ ಗೀತೆಗಳಲ್ಲೊಂದು. ಅರ್ಥಪೂರ್ಣ ಸಾಹಿತ್ಯ, ಅಶ್ವಥ್ ಅವರ ಸುಮಧುರ ಸಂಗೀತ ಮತ್ತು ಸಂಗೀತ ಕಟ್ಟಿಯವರ ಅಮೋಘ ಗಾಯನ ಎಲ್ಲವೂ ಇದರಲ್ಲಿ ಮೇಳೈಸಿವೆ.
ಒಂದು ಹೆಣ್ಣಿನ ಒಂಟಿತನದ ತುಮುಲತೆ ಹಾಗೂ ಅವಳ ಆಸೆಗಳನ್ನು ಈ ಹಾಡಿನ ಸಾಲುಗಳು ಬಣ್ಣಿಸುತ್ತವೆ.
ಈ ಹಾಡಿನ ಪೂರ್ಣ ಸಾಹಿತ್ಯ ಕೆಳಗಿದೆ.
ಚಿತ್ರ: ನಾಗಮಂಡಲ
ಸಂಗೀತ: ಸಿ. ಅಶ್ವಥ್
ಗಾಯನ: ಸಂಗೀತ ಕಟ್ಟಿ
ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಬೊಟ್ಟ ಹೇಳ ಉತ್ತಾರವಾ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ
ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಬೊಟ್ಟ ಹೇಳ ಉತ್ತಾರವಾ
ನೀರೊಲೆಯ ನಿಗಿ ಕೆಂಡ ಸತ್ಯವೇ
ಈ ಅಭ್ಯಂಜನವಿನ್ನೂ ನಿತ್ಯವೇ
ಒಳ್ಳೇ ಘಮಗುಡುತಿಯಲ್ಲೆ ಸೀಗೆಯೇ
ನಿನ್ನ ವಾಸನೀ ಹರಡಿರಲಿ ಹೀಗೆಯೇ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ
ಒಪ್ಪಿಸುವೆ ಹೂ-ಹಣ್ಣು ಭಗವಂತ
ಙ್ನೆಪ್ಪಿಲೆ ಹರಸುನಗಿ ಇರಲೆಂತ
ಕಪ್ಪುರವ ಬೆಳಗುವೆ ದೇವನೇ
ತಪ್ಪದೆ ಬರಲೆನ್ನ ಗುಣವಂತ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ
ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಬೊಟ್ಟ ಹೇಳ ಉತ್ತಾರವಾ
ಈ ಹಾಡನ್ನು ಇಲ್ಲಿ ಕೇಳಬಹುದು.
Subscribe to:
Post Comments (Atom)

No comments:
Post a Comment